One Tap News - Kannada News Daily

Header
collapse
...
Home / Kodagu / ವನ್ಯಜೀವಿ - ಮಾನವ ಸಂಘರ್ಷ. ಇಂದು ಶನಿವಾರ ಬೆಳಿಗ್ಗೆಯಿಂದ ತಿತಿಮತಿಯಲ್ಲಿ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ

ವನ್ಯಜೀವಿ - ಮಾನವ ಸಂಘರ್ಷ. ಇಂದು ಶನಿವಾರ ಬೆಳಿಗ್ಗೆಯಿಂದ ತಿತಿಮತಿಯಲ್ಲಿ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ

2026-06-06  Kodagu Desk  12 views
ವನ್ಯಜೀವಿ - ಮಾನವ ಸಂಘರ್ಷ.  ಇಂದು ಶನಿವಾರ ಬೆಳಿಗ್ಗೆಯಿಂದ ತಿತಿಮತಿಯಲ್ಲಿ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ

ವನ್ಯಜೀವಿ - ಮಾನವ ಸಂಘರ್ಷ. 

ಇಂದು ಶನಿವಾರ ಬೆಳಿಗ್ಗೆಯಿಂದ ತಿತಿಮತಿಯಲ್ಲಿ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ

 

ಆನೆ ಮತ್ತು ಮಾನವ ಸಂಘರ್ಷ ಮಿತಿಮೀರಿದ್ದು, ನೆನ್ನೆ ದಕ್ಷಿಣ ಕೊಡಗಿನಲ್ಲಿ  ಮಹಿಳೆಯೊಬ್ಬರು ಆನೆ ತುಳಿತಕ್ಕೆ ಬಲಿಯಾಗಿದ್ದಾರೆ.

 ಈ ಸಂಬಂಧ ಇಂದು ಜೂನ್ 6ನೇ ತಾರೀಕು ಶನಿವಾರ 10 ಗಂಟೆಗೆ ತಿತಿಮತಿ ಅರಣ್ಯ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ಹಾಗು ಹೆದ್ದಾರಿಯಲ್ಲಿ ಮಾನವ ಸರಪಳಿ ಕೈಗೊಂಡು  ಹೆದ್ದಾರಿ ಬಂದ್ ಚಳುವಳಿಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಬೃಹತ್  ಹಮ್ಮಿಕೊಂಡಿದೆ.

 ಬೆಂಗಳೂರು ಮೈಸೂರಿಗೆ ಪ್ರಯಾಣ ಬೆಳೆಸುವವರು ನಾಳೆ ಶನಿವಾರ ಬೆಳಿಗ್ಗೆಯಿಂದ ಈ ಮಾರ್ಗದಲ್ಲಿ ಸಂಚರಿಸಲು ಅಡಚಣೆ ಉಂಟಾಗುವ ಸಾಧ್ಯತೆ ಇದೆ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕಾಫಿ ಬೆಳೆಗಾರರು, ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು ರಸ್ತೆ ತಡೆ ಅಧಿಕ ಸಮಯ ನಡೆಯುವ ನಿರೀಕ್ಷೆ ಇದೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.


Share: